Saturday, 15 July 2017

ಅಂಗಕ್ಕೆ ಆಚಾರವೆ ಆಶ್ರಯ.

ಅಂಗಕ್ಕೆ ಆಚಾರವೆ ಆಶ್ರಯ.
ಆಚಾರಕ್ಕೆ ಪ್ರಾಣವೆ ಆಶ್ರಯ.
ಪ್ರಾಣಕ್ಕೆ ಜ್ಞಾನವೆ ಆಶ್ರಯ.
ಜ್ಞಾನಕ್ಕೆ ಲಿಂಗವೆ ಆಶ್ರಯ.
ಲಿಂಗಕ್ಕೆ ಜಂಗಮವೆ ಆಶ್ರಯ.
ಇಂತೀ ಪಂಚಲಕ್ಷಣ ಪರಿಪೂರ್ಣವಾಗಿರಬಲ್ಲಡೆ
ಸದ್ಭಕ್ತನೆಂಬೆನಯ್ಯಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

-ತೋಂಟದ ಸಿದ್ಧಲಿಂಗ ಶಿವಯೋಗಿಗಳು

No comments:

Post a Comment