Sunday, 16 July 2017

ಶರಣರ ಮನ ನೋಯ ನುಡಿದೆನಾಗಿ

ಶರಣರ ಮನ ನೋಯ ನುಡಿದೆನಾಗಿ,
ಹರಜನ್ಮವಳಿದು ನರಜನ್ಮಕ್ಕೆ ಬಂದೆನು.
ಹರನಟ್ಟಿದ ಬೆಸನ ಶಿರದೊಳಗಾಂತೊಡೆ,
ಗಿರಿಗಳ ಭಾರವೆನಗಾದುದಯ್ಯ.
ಚೆನ್ನಮಲ್ಲಿಕಾರ್ಜುನನ ಧರ್ಮದಿಂದ
ಸಂಸಾರ ಕರ್ಮದ ಹೊರೆಯನಿಳುಹಿ, ನಡುದೊರೆಯ ಹಾಯಿದು ಹೋದೆನು.

-ಅಕ್ಕಮಹಾದೇವಿ

No comments:

Post a Comment