Saturday, 22 July 2017

ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನರಿಯದೆ

ಶಣ್ಮುಖ ಶಿವಯೋಗಿಗಳ ವಚನ
 ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನರಿಯದೆ 
ಪರರ ಎದೆಯಲ್ಲಿ ನೊಣವನರಿ 
ಸುವ ಮರುಳ ಮಾನವರoತೆ,
ತನ್ನoಗ ಮನದ ಅವಗುಣವ.
ನೂಕಲರಿಯದೆ ಪರರ ಅವಗುಣವನೆಣೆಸುವ, ಮರುಳ 
ಮಾನವರನು ಎನಗೆ ತೋರ
ದಿರಾ ಅಖoಡೇಶ್ವರಾ."
       ವ್ಯಕ್ತಿ ತನ್ನಲ್ಲಿರುವ ತಪ್ಪು ಅವಗುಣಗಳನ್ನು, ತಪ್ಪುಗಳನ್ನು 
ಎಣಿಸುತ್ತಿರುತ್ತಾರೆ. ಅದನ್ನೇ ಶಿವ ಯೋಗಿಗಳು ಹೀಗೆ ಹೇಳಿದ್ದಾರೆ.
ತನ್ನ ಮುoದಿರುವ ತಟ್ಟೆಯಲ್ಲಿ 
ಕಪ್ಪೆ ಸತ್ತು ಬಿದ್ದುದನ್ನು ನೋಡದೇ ಇನ್ನೋಬ್ಬರ   ತಟ್ಟೆ  ಯಲ್ಲಿನ ನೊಣವನ್ನು ನೋಡು
ತ್ತಿರುತ್ತಾರೆ. ಹಾಗೆಯೇ ತನ್ನ ಅoಗದ ಮತ್ತು ಮನದ ಅವಗು
ಣಗಳನ್ನು ಎಣಿಸುವ ಮರುಳ 
ಮಾನವರ ಮುಖವನ್ನು ನನಗೆ 
ತೋರಿಸದಿರು ತoದೆ ಎಂದು ಹೇಳಿದ್ದಾರೆ. ಅoದರೆ ಮೊದಲು 
ತನ್ನನ್ನು ತಾನು ತಿದ್ದಿಕೊoಡು ನo ತರ ಬೇರೆಯವರನ್ನು ತಿದ್ದುವದು ಒಳಿತು. ತನ್ನಲ್ಲಿಯೇ ಕೆಟ್ಟ ಗುಣ 
ಗಳನ್ನು ಇಟ್ಟುಕೊoಡು ಇನ್ನೊ 
ಬ್ಬರ ಅವಗುಣಗಳ ಬಗ್ಗೆ ಮಾತ 
ನಾಡುವದು ಎಷ್ಟು ಸರಿ ? ಈ 
ನಿಟ್ಟಿನಲ್ಲಿ ಎಲ್ಲರೂ ತಮ್ಮನ್ನು 
ತಾವು ಅವಲೋಕನ ಮಾಡಿಕೊ ಳ್ಳಲಿ ಎಂಬುದೇ ಶರಣರ ಆಶಯ.

No comments:

Post a Comment